Janagala sulige

ಜನಗಳ ಸುಲಿಗೆ ಮಾಡುವ
ಈ ಕರೆಂಟು ಇಲ್ಲದೇ ಇದ್ದಿದ್ದರೆ
ಒಬ್ಬೊಬ್ಬನಿಗೂ ಒಂದೊಂದು
ಪಂಜು ಹುಡುಕುವ ತಾಕತ್ತು ಬರುತ್ತಿತ್ತು
ಯಾವುದೇ ಬೀಜದ ಎಣ್ಣೆ ಸುರಿದು
ಹೊತ್ತಿಸಿಕೊಂಡು ಓಡಾಡಬಹುದಿತ್ತು
ಕರೆಂಟು ಕೈಲಿ ಹಿಡಿದವರೆಲ್ಲ
ಕೊನೆ ಕಂಡರು
ಪಂಜು ಹಿಡಿದವರೆಲ್ಲ
ಮನೆ ಮುಟ್ಟಿದರು.

      -- ಸಿ.ವಿ.ಶೇಷಾದ್ರಿ ಹೊಳವನಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Search all your queries

Custom Search
 
Copyright 2009 ಕನ್ನಡ ಕಾವ್ಯ. Powered by Blogger Blogger Templates create by Deluxe Templates. WP by Masterplan