ಕಳೆದವಾರ ತರಂಗದಲ್ಲಿ ಬಂದ ದೊರೆಸ್ವಾಮಿ ಅವರು ಬರೆದ ಹನಿಗವನ. ನಿಮಗೆ ಇಷ್ಟವಾಗಬಹುದು:
ಕೃತಜ್ಞತೆ
ನಾನು ಹೊಳೆಯ ದಾಟಲು ಬಂದವನು
ದಾಟಿಸಲು ದೋಣಿ ತಂದವನು ನೀನು
ಹುಟ್ಟು ಹಾಕಿ ದೋಣಿಯನ್ನು
ದಡದಿಂದ ದಡಕ್ಕೆ
ಸಾಗಿಸುವುದಷ್ಟೇ ನಿನ್ನ ಕೆಲಸ
ದಡ ಸೇರಿದ ಮೇಲೆ
ಕೃತಜ್ಞತೆ ಹೇಳುವುದಷ್ಟೇ ನನ್ನ ಕೆಲಸ!!
ಇನ್ನೊಂದು ನನಗೆ ಇಷ್ಟವಾದ ಹನಿಗವನ, ಜರಗನಹಳ್ಳಿ ಶಿವಶಂಕರ್ ಬರೆದದ್ದು.
ನಂಟು
ಮನುಷ್ಯನ ಬದುಕಿಗೆ
ಅನ್ನ, ನೆರಳು ನೀಡಿ
ಬೆಳಸಿದ ತಪ್ಪಿಗೆ
ತಾನೂ ಉರಿವುದು
ಕಟ್ಟಿಗೆಯಾಗಿ
ದೇಹದ ಒಟ್ಟಿಗೆ
ಚಿತೆಯಲ್ಲಿ ಕೊನೆಗೆ ...
Search all your queries

Custom Search
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ