My Kannada SMS Collection

Today is my SMS updating day!! Yes, every week I'll receive around 600 SMS and I try to translate best of them in my mother tongue Kannada. 


This is just a timepass activity I'm indulging in. So if U find any mistakes in Kannada grammar or any other errors, please be kind enough leave a comment. I'll try to correct them.


ಸರ್ದಾರ್ಜಿ ಗ್ರೆನೇಡ್ ಎಸೆದ್ರೆ ಏನ್ ಮಾಡ್ಬೇಕು?
ಅದರ ಪಿನ್ ತೆಗೆದು ವಾಪಸ್ ಅವನ್ಗೆನೆ ಎಸಿಬೇಕು!!!


ಕಾರು ಸಾಲ ಮರುಪಾವತಿ ಮಾಡದೆ ಇದ್ದುದ್ದಕ್ಕೆ ಬ್ಯಾಂಕ್ನವರು ಕಾರನ್ನು ವಾಪಸ್ ತೆಗೆದುಕೊಂಡು ಹೋದಾಗ, ಮದುವೆಗೂ ಸಾಲ ಮಾಡಬಾರದಿತ್ತೆ ಅನ್ನಿಸಿತ್ತು ತಿಂಮನಿಗೆ!!!


ನಾನು ಅಂತ್ಯದ ಆರಂಭ.
ಅರಿಶಡ್ವರ್ಗಗಳಲ್ಲಿ ನನ್ನನ್ನು ಕಾಣಬಹುದು.
ಅನಂತಾನಂತಗಳಲ್ಲಿ ನಾನಿದ್ದೇನೆ.
ಅಡಿಕೆ ಮರದಲ್ಲಿ, ಮುದುಕಿಯ ಅಡಿಗೋಲಿನಲ್ಲಿ ಅಡಗಿದ್ದೀನಿ.
ಅಭಿಸಾರಿಕೆಯ ಪ್ರೀತಿ, ಅಪ್ಪನ ಅಪ್ಪುಗೆಯಲ್ಲೂ ನಾನಿದ್ದೇನೆ ಗೊತ್ತೇ!!
ಹಾಗಾದರೆ ನಾನ್ಯಾರು ಹೇಳಿ ಮತ್ತೆ??

ಕಡುಬಡತನ

ವೈದ್ಯರ ಸಮ್ಮೇಳನ ನಡೆಯುತ್ತಿತ್ತು. ಹೊರಗೆ
ಕಡು ಬಡವಿಯೊಬ್ಬಳು ಅಳುತ್ತಿದ್ದಳು.

"ಮದ್ದಿದ್ದರೆ ಕೊಡಿ ಸ್ವಾಮಿ,
ಹರಕಲು ಗುಡಿಸಲುಗಳಲ್ಲಿ ಆಸೆಗಳೇ ಏಳದಂತೆ,
ಮುರುಕಲು ಮನೆಗಳಲ್ಲಿ ಆಕಾಂಕ್ಷೆಗಳೇ ಆರುವಂತೆ,
ಬಡವರ ಹಸಿವೇ ಇಂಗುವಂತೆ,
ಮದ್ದಿದ್ದರೆ ಕೊಡಿ."

  - ಡಾ. ಅನುರಾಧಾ ಕಾಮತ್

ಜಗವೆಂಬ ಸಂಗೀತ ವಿದ್ಯಾಲಯ

ಆತ ಸಂಗೀತ ಕಲಿಯಲಾರಂಭಿಸಿದ್ದ.
ಅವನಿಗೀಗ ಅರಿವಾಗತೊಡಗಿತ್ತು.

ಸಂಗೀತವರಿಯದ ಅಜ್ಜಿ
ಭಜನೆಯ ಕೊನೆಯಲ್ಲಿ ಭೈರವಿಯೆ ಹಾಡುತ್ತಿದ್ದಳು.

ರೈಲಿನ ಶಿಳ್ಳೆ ಪಂಚಮದಲ್ಲಿತ್ತು.

ಕುದುರೆಯ ಖುರಪುಟದ ಸದ್ದಿನಲ್ಲೂ
ತಾಳಲಯವಿತ್ತು.

ಹಕ್ಕಿಯ ಚಿಲಿಪಿಲಿ, ಮಕ್ಕಳ ನಗು,
ಆಕಳ ಅಂಬಾ, ಎಲ್ಲಿಲ್ಲ ಸಂಗೀತದ ಸ್ಪರ್ಶ!

     - ಡಾ. ಅನುರಾಧಾ ಕಾಮತ್

Search all your queries

Custom Search
 
Copyright 2009 ಕನ್ನಡ ಕಾವ್ಯ. Powered by Blogger Blogger Templates create by Deluxe Templates. WP by Masterplan