ಜಗವೆಂಬ ಸಂಗೀತ ವಿದ್ಯಾಲಯ

ಆತ ಸಂಗೀತ ಕಲಿಯಲಾರಂಭಿಸಿದ್ದ.
ಅವನಿಗೀಗ ಅರಿವಾಗತೊಡಗಿತ್ತು.

ಸಂಗೀತವರಿಯದ ಅಜ್ಜಿ
ಭಜನೆಯ ಕೊನೆಯಲ್ಲಿ ಭೈರವಿಯೆ ಹಾಡುತ್ತಿದ್ದಳು.

ರೈಲಿನ ಶಿಳ್ಳೆ ಪಂಚಮದಲ್ಲಿತ್ತು.

ಕುದುರೆಯ ಖುರಪುಟದ ಸದ್ದಿನಲ್ಲೂ
ತಾಳಲಯವಿತ್ತು.

ಹಕ್ಕಿಯ ಚಿಲಿಪಿಲಿ, ಮಕ್ಕಳ ನಗು,
ಆಕಳ ಅಂಬಾ, ಎಲ್ಲಿಲ್ಲ ಸಂಗೀತದ ಸ್ಪರ್ಶ!

     - ಡಾ. ಅನುರಾಧಾ ಕಾಮತ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Search all your queries

Custom Search
 
Copyright 2009 ಕನ್ನಡ ಕಾವ್ಯ. Powered by Blogger Blogger Templates create by Deluxe Templates. WP by Masterplan