ವೈದ್ಯರ ಸಮ್ಮೇಳನ ನಡೆಯುತ್ತಿತ್ತು. ಹೊರಗೆ
ಕಡು ಬಡವಿಯೊಬ್ಬಳು ಅಳುತ್ತಿದ್ದಳು.
"ಮದ್ದಿದ್ದರೆ ಕೊಡಿ ಸ್ವಾಮಿ,
ಹರಕಲು ಗುಡಿಸಲುಗಳಲ್ಲಿ ಆಸೆಗಳೇ ಏಳದಂತೆ,
ಮುರುಕಲು ಮನೆಗಳಲ್ಲಿ ಆಕಾಂಕ್ಷೆಗಳೇ ಆರುವಂತೆ,
ಬಡವರ ಹಸಿವೇ ಇಂಗುವಂತೆ,
ಮದ್ದಿದ್ದರೆ ಕೊಡಿ."
- ಡಾ. ಅನುರಾಧಾ ಕಾಮತ್
ನ್ಯಾನೋ ಕಥೆಗಳು ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ನ್ಯಾನೋ ಕಥೆಗಳು ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಜಗವೆಂಬ ಸಂಗೀತ ವಿದ್ಯಾಲಯ
ಆತ ಸಂಗೀತ ಕಲಿಯಲಾರಂಭಿಸಿದ್ದ.
ಅವನಿಗೀಗ ಅರಿವಾಗತೊಡಗಿತ್ತು.
ಸಂಗೀತವರಿಯದ ಅಜ್ಜಿ
ಭಜನೆಯ ಕೊನೆಯಲ್ಲಿ ಭೈರವಿಯೆ ಹಾಡುತ್ತಿದ್ದಳು.
ರೈಲಿನ ಶಿಳ್ಳೆ ಪಂಚಮದಲ್ಲಿತ್ತು.
ಕುದುರೆಯ ಖುರಪುಟದ ಸದ್ದಿನಲ್ಲೂ
ತಾಳಲಯವಿತ್ತು.
ಹಕ್ಕಿಯ ಚಿಲಿಪಿಲಿ, ಮಕ್ಕಳ ನಗು,
ಆಕಳ ಅಂಬಾ, ಎಲ್ಲಿಲ್ಲ ಸಂಗೀತದ ಸ್ಪರ್ಶ!
- ಡಾ. ಅನುರಾಧಾ ಕಾಮತ್
ಅವನಿಗೀಗ ಅರಿವಾಗತೊಡಗಿತ್ತು.
ಸಂಗೀತವರಿಯದ ಅಜ್ಜಿ
ಭಜನೆಯ ಕೊನೆಯಲ್ಲಿ ಭೈರವಿಯೆ ಹಾಡುತ್ತಿದ್ದಳು.
ರೈಲಿನ ಶಿಳ್ಳೆ ಪಂಚಮದಲ್ಲಿತ್ತು.
ಕುದುರೆಯ ಖುರಪುಟದ ಸದ್ದಿನಲ್ಲೂ
ತಾಳಲಯವಿತ್ತು.
ಹಕ್ಕಿಯ ಚಿಲಿಪಿಲಿ, ಮಕ್ಕಳ ನಗು,
ಆಕಳ ಅಂಬಾ, ಎಲ್ಲಿಲ್ಲ ಸಂಗೀತದ ಸ್ಪರ್ಶ!
- ಡಾ. ಅನುರಾಧಾ ಕಾಮತ್
Labels:
ನ್ಯಾನೋ ಕಥೆಗಳು
Search all your queries
Custom Search