ಹನಿಗವನಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹನಿಗವನಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಒಂದು ಸತ್ಯ

ಅಭಿವೃದ್ಧಿ ಯೋಜನೆಗೆ ಹಳ್ಳಿಗರ ತ್ಯಾಗ
ಪಟ್ಟಣದ ಜನಗಳಿಗೆ ಫಲದ ಬಹು ಭಾಗ
ಈ ವ್ಯಥೆಯ ಕಥೆಗುಂಟು ಬಗೆಬಗೆಯ ಬಣ್ಣ
ಒಂದು ಕಣ್ಣಿಗೆ ಬೆಣ್ಣೆ, ಒಂದಕ್ಕೆ ಸುಣ್ಣ...
                     - ಪಳಕಳ ಸೀತಾರಾಮ ಭಟ್ಟ

ರೈತ

ಕೃತಕ ಮಳೆಯ
ಮೊದಲ ಹನಿ
ಬಿತ್ತು,
ನೇಣು ಹಾಕಿಕೊಂಡ
ರೈತನ ಹಗ್ಗದ
ಮೇಲೆ.
  --- ವಿ.ಪುಗಳೆಂದಿ

ಕೃತಜ್ಞತೆ ಮತ್ತು ನಂಟು

ಕಳೆದವಾರ ತರಂಗದಲ್ಲಿ ಬಂದ ದೊರೆಸ್ವಾಮಿ ಅವರು ಬರೆದ ಹನಿಗವನ. ನಿಮಗೆ ಇಷ್ಟವಾಗಬಹುದು:

ಕೃತಜ್ಞತೆ 
ನಾನು ಹೊಳೆಯ ದಾಟಲು ಬಂದವನು
ದಾಟಿಸಲು ದೋಣಿ ತಂದವನು ನೀನು
ಹುಟ್ಟು ಹಾಕಿ ದೋಣಿಯನ್ನು
ದಡದಿಂದ ದಡಕ್ಕೆ
ಸಾಗಿಸುವುದಷ್ಟೇ ನಿನ್ನ ಕೆಲಸ
ದಡ ಸೇರಿದ ಮೇಲೆ
ಕೃತಜ್ಞತೆ ಹೇಳುವುದಷ್ಟೇ ನನ್ನ ಕೆಲಸ!!


ಇನ್ನೊಂದು ನನಗೆ ಇಷ್ಟವಾದ ಹನಿಗವನ, ಜರಗನಹಳ್ಳಿ ಶಿವಶಂಕರ್ ಬರೆದದ್ದು.

ನಂಟು 
ಮನುಷ್ಯನ ಬದುಕಿಗೆ
ಅನ್ನ, ನೆರಳು ನೀಡಿ
ಬೆಳಸಿದ ತಪ್ಪಿಗೆ
ತಾನೂ ಉರಿವುದು
ಕಟ್ಟಿಗೆಯಾಗಿ
ದೇಹದ ಒಟ್ಟಿಗೆ
ಚಿತೆಯಲ್ಲಿ ಕೊನೆಗೆ ...

ಚಂದ್ರನ ಕುರಿತಾದ ಹನಿಗವನಗಳು - ಭಾಗ ೨

ಚಂದ್ರ ಚುಟುಕು - ೨

ಬೃಹತ್
ನೃತ್ಯ ಸಮಾವೇಶ
ಬಾನಂಗಳ ತುಂಬೆಲ್ಲಾ
ತಾರೆಗಳ ನರ್ತನ
ನಿತ್ಯ ನಿರಂತರ -
ಪ್ರೇಕ್ಷಕ
ಒಬ್ಬಂಟಿ ಚಂದಿರ!

*********

ಶುಕ್ಲಪಕ್ಷದಲಿ
ಗಮ್ಮತ್ತು
ಕೃಷ್ಣಪಕ್ಷದಲಿ
ದಯಟ್ಟು
ಚಂದ್ರನ
ಆರೋಗ್ಯದ ಒಳಗುಟ್ಟು !!

*******

ಮತ್ತೇರಿ ಕುಣಿಯುತ್ತಿದ್ದಾರೆ
ನರ್ತಕಿಯರು
ದಣಿವಿಲ್ಲದ ಹಾಗೆ -
ಬೆಳದಿಂಗಳ
ಕುಡಿದ ಮಾತ್ರಕ್ಕೇ
ಆಗುವುದೇ ಹೀಗೆ ?

    --- ಅರವಿಂದ ದೀಕ್ಷಿತ್

ಹನಿಗವನಗಳು

ದೋಣಿ
ಮುಳುಗುವ ದೋಣಿ ಎಂಬ
ಖಚಿತ ಧಾವಂತದಲ್ಲಿ
ಬಂಧುಗಳೆಲ್ಲಾ ಹೊರ ಜಿಗಿದಾಗ,
ಭಾರ ಕಡಿಮೆಯಾಗಿ
ದೋಣಿ ಮುಳುಗಲೇ ಇಲ್ಲ.
          -- ಡಾ| ಶಾಂತಲಕ್ಷ್ಮಿ

ಪರಿಮಳದ ಮನೆ

ಕಲ್ಲೊಂದು ಪೊದೆಗೆ ಬಿದ್ದಾಗ
ಹಕ್ಕಿ ರಿವ್ವನೆ ಹಾರಿತು
ಮೊಲ ಛಂಗನೆ ನೆಗೆಯಿತು
ಹಾವು ಹೆಡೆಯೆತ್ತಿ ಸರಿಯಿತು
ಕಲ್ಲು ಹೃದಯದಿಂದ
ಭಯದ ಅಲೆಗಳು.

ಹೂವೊಂದು ಗಿಡದಲ್ಲಿ ಅರಳಿದಾಗ
ದುಂಬಿ ಹಾರಿ ಬಂತು
ಚಿಟ್ಟೆ ತೇಲಿ ಬಂತು
ಹುಡುಗಿ ಓಡಿ ಬಂದಳು
ಹೂವಿನ ಒಡಲಿಂದ
ಖುಷಿಯ ತರಂಗಗಳು.

ಕಲ್ಲಿಗೆ ಕಮಟು ವಾಸನೆ
ಹೂವು ಪರಿಮಳದ ಮನೆ.

-- ರವಿಶಂಕರ oddambettu

ಚಂದ್ರನ ಕುರಿತಾದ ಹನಿಗವನಗಳು - ಭಾಗ ೧

ಚಂದ್ರ ಚುಟುಕು 

ಇಂದುಮುಖಿಯರೆಲ್ಲಾ
ಖುಷಿಪಟ್ಟ
ಆ ಕ್ಷಣ
ಚಂದ್ರ ಗ್ರಹಣ !

********
ತಾರೆಯರೇ ಹೀಗೆ
ಕಣ್ಣು ಹೊಡೆದ ಮಾತ್ರಕ್ಕೇ
ಚಂದ್ರ ಸಿಕ್ಕುವನೇ?
ಪಾಪ!
ಇರುವನು ಅವನೊಬ್ಬನೇ !!

************

ಎಂಥ
ಅಹಂಕಾರ
ಚಂದ್ರನಿಗೆ
ಹೀಗಾ
ಚೆಲ್ಲಾಡುವುದು
ನಗ ನತ್ತುಗಳ
ತುಂಬಿ ಹೋಗಿದೆಯಲ್ಲ
ಬಾನಂಗಳ  !!
 
         -- ಅರವಿಂದ ದೀಕ್ಷಿತ್
       
**********

ಮುಂದುವರೆಯುವುದು...

ಹನಿಗವನಗಳು

ಬಡವ
ಗೆಳತೀ,
ನಿನ್ನ ಚಕ್ಕೆ ಕಣ್ಣುಗಳ
ಕಂಡಾಗಲೆಲ್ಲ
ಅನಿಸಿದ್ದು,
ಆ ಆಕಾಶದರಸ
ಎಂಥಾ ಬಡವ !!!
   -- ಡಾ! ಗೋವಿಂದ ಹೆಗಡೆ

ಸೋಜಿಗ
ಹೊಲದ ಒಡತಿಯ ಸೆರಗು
ಸೋಕಿ
ಹುಲ್ಲು ಕಡ್ಡಿಯಲಿ
ತೆನೆ ಕಾಳು ಕಟ್ಟಿತು !
  -- ಶಿವಕುಮಾರ ಸಾಯ

ಹನಿಗವನಗಳು

Hello reader. Thanks for visiting my kannada blog. I recently got married and found a few interesting n funny poems in my diary. Just thought to post these on my blog for U... Happy reading :)


ಮದುವೆಯಾಯ್ತು,
ಹೆಂಡತಿ ಮನೆಗೆ ಬಂದಳು,
ಮನೆ ಸ್ವರ್ಗವಾಯ್ತು....... ನಾನೀಗ ಸ್ವರ್ಗವಾಸಿ!!!!

*********

ಹಲವಾರು ವರುಷಗಳ ಅನುಭವ ಇದ್ದರೂ,
ಅದನ್ನು ನಮ್ಮ ಬಯೋಡಾಟದಲ್ಲಿ ಸೇರಿಸಲಾಗದಂಥ
ಏಕೈಕ ಕೆಲಸವೆಂದರೆ - ಫ್ಲರ್ಟಿಂಗ್!!!

*********

ತನ್ನ ತಪ್ಪಿದ್ದಾಗ ಶರಣಾಗುವನು ಪ್ರಾಮಾಣಿಕ,
ತಾನ್ ಮಾಡಿರುವುದು ಸರಿಯೇ ತಪ್ಪೇ ಗೊತ್ತಿಲ್ಲದಾಗ
ಶರಣಾಗುವವನು ಬುದ್ಧಿವಂತ....

ತಾನು ಸರಿಯಿದ್ದಾಗಲೂ ಶರಣಾಗುವವನು ಗಂಡ...!!!!

Search all your queries

Custom Search
 
Copyright 2009 ಕನ್ನಡ ಕಾವ್ಯ. Powered by Blogger Blogger Templates create by Deluxe Templates. WP by Masterplan